ಶುಕ್ರವಾರ, ಅಕ್ಟೋಬರ್ 14, 2011

ಕನ್ನಡ ಸಾಹಿತ್ಯದಲ್ಲಿನ ಸಂಧಿಕಾಲ

ಮುಮ್ಮಡಿ ಕೃಷ್ಣರಾಜ ಒಡೆಯರ್:
·         ಚಿಕ್ಕದೇವರಾಜ ಒಡೆಯರ್ ಅವರ ನಂತರ ವಿದ್ವತ್ಕವಿಪೋಷಕರಾದ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅನೇಕ ವಿದ್ವಾಂಸರಿಗೆ ಆಶ್ರಯದಾತರಾಗಿದ್ದರು.
·         ಶ್ರೀಕೃಷ್ಣರಾಜ ವಾಣೀವಿಲಾಸ ಭಾರತ, ಶಾಕುಂತಲ ನಾಟಕದ ನವೀನಟೀಕೆ ಮೊದಲಾದ ಹಲವು ಗದ್ಯಗ್ರಂಥಗಳನ್ನು ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ರಚಿಸಿದ್ದಾರೆ.
ಕೆಂಪುನಾರಾಯಣ:
·         ಈತ ಮುದ್ರಾಮಂಜೂಷ ಎಂಬ ಉತ್ತಮ ಗದ್ಯಗ್ರಂಥವನ್ನು ರಚಿಸಿದನು.
·         ಈ ಗ್ರಂಥವು ಚಾಣಕ್ಯನು ನಂದರ ವಿನಾಶವನ್ನುಂಟುಮಾಡಿದ ಕಥೆಯನ್ನೂ, ಆನಂತರದ ಬೆಳವಣಿಗೆಗಳ ಕಥೆಯನ್ನೂ ಆಮೂಲಾಗ್ರವಾಗಿ ತಿಳಿಸುತ್ತದೆ.
ಚಾಮರಾಜ ಒಡೆಯರ್ ಅವರ ಕಾಲದಲ್ಲಿ ಅನೇಕ ಸಂಸ್ಕೃತ ನಾಟಕಗಳು ಕನ್ನಡಕ್ಕೆ ತರ್ಜುಮೆಯಾದವು.
·         ಅಭಿನವ ಕಾಳಿದಾಸ ಎಂದೇ ಖ್ಯಾತರಾದ ಬಸವಪ್ಪಶಾಸ್ತ್ರಿಯವರು ತಮ್ಮ ಶಾಕುಂತಲ ಮೊದಲಾದ ನಾಟಕಗಳನ್ನೂ, ದಮಯಂತೀ ಸ್ವಯಂವರ ಮುಂತಾದ ಕಾವ್ಯಗಳನ್ನು ಬರೆದದ್ದು ಚಾಮರಾಜ ಒಡೆಯರ್ ಅವರ ಕಾಲದಲ್ಲಿಯೇ.
ಮುದ್ದಣ:
·         19ನೆಯ ಶತಮಾನದ ಕೊನೆಯಲ್ಲಿ ಗ್ರಂಥರಚನೆ ಮಾಡಿದ ಮುದ್ದಣನ ನಿಜವಾದ ಹೆಸರು ನಂದಳಿಕೆ ಲಕ್ಷ್ಮೀನಾರಾಯಣಪ್ಪ.
·         ಈತ ಹಳಗನ್ನಡ ಗದ್ಯದಲ್ಲಿ ಬರೆದ ರಾಮಾಶ್ವಮೇಧದ ಹಾಸ್ಯಭರಿತ ಸಂಭಾಷಣೆಗಳು ಕನ್ನಡಿಗರಿಗೆ ಅಚ್ಚುಮೆಚ್ಚು.
·         ಮುದ್ದಣನು ಅದ್ಭುತ ರಾಮಾಯಣ, ರಾಮಪಟ್ಟಾಭಿಷೇಕಗಳನ್ನೂ ಹಾಗೂ ಕೆಲವು ಯಕ್ಷಗಾನ ಪ್ರಸಂಗಗಳನ್ನೂ ರಚಿಸಿರುವುದಾಗಿ ತಿಳಿದಿದೆ.
ಜನಪದ ಸಾಹಿತ್ಯ:
·         ಶ್ರೀಮಂತ ಜನಪದದಲ್ಲಿನ ಪದ್ಯಗಳು ಬಾಯಿಂದ ಬಾಯಿಗೆ ಹರಿದಿವೆ.
·         ಅನೇಕ ಲಾವಣಿಗಳು ಪ್ರಚಾರದಲ್ಲಿವೆ.
·         ವೀರತ್ವದ ಟಿಪ್ಪುಸುಲ್ತಾನ್ ಲಾವಣಿ, ಸರ್ಜಪ್ಪನಾಯಕನ ಲಾವಣಿ, ಹಲಗಲಿಯ ಬೇಡರ ಲಾವಣಿಗಳು ಪ್ರಸಿದ್ಧವಾಗಿವೆ.
·         ಜನಪದ ಕಥೆಗಳು ರೋಮಾಂಚಕವಾಗಿರುತ್ತವೆ.
·         ಸಾಮಾಜಿಕ ಜೀವನದ ಚಿತ್ರಣವನ್ನು ಕಟ್ಟಿಕೊಡುವಲ್ಲಿ ಸಫಲವಾಗುತ್ತವೆ.
·         ಜನಪದರ ಹಾಡುಗಳಂತೂ ನಿಜಕ್ಕೂ ಜನಜೀವನದ ಅವಿಭಾಜ್ಯ ಅಂಗವೇ ಆಗಿವೆ.
ಸರ್ವಜ್ಞ:
·         ಈತನ ತ್ರಿಪದಿಗಳು ಪ್ರಸಿದ್ಧವಾಗಿವೆ.
·         ಈತ ಬಹುತೇಕ ಆಶುಕವಿಯೇ ಇದ್ದಿರಬೇಕು.
·         ಈತ ಕನ್ನಡ ನಾಡನ್ನೆಲ್ಲಾ ಸಂಚರಿಸಿದಂತೆ ಇವನ ಪದ್ಯಗಳಿಂದ ತಿಳಿಯುತ್ತದೆ.
·         ಈತ ಶೈವಧರ್ಮದ ಹಲವು ಸಿದ್ಧಾಂತಗಳನ್ನೂ ಲೌಕಿಕ ನೀತಿಗಳನ್ನೂ ಉಪದೇಶಿಸುತ್ತಾನೆ.
·         ಈತ ಸಮಾಜದ ಕುಂದುಕೊರತೆಗಳನ್ನು ಎತ್ತಿ ತೋರಿಸುತ್ತಾನೆ.
·         ಸರ್ವಜ್ಞ ಹಾಸ್ಯಪ್ರಿಯ; ಈತನದು ನಕ್ಕು ನಗಿಸುವ ಗುಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ