ಸೋಮವಾರ, ಡಿಸೆಂಬರ್ 6, 2010

ಪಂಪನ ಯುಗ (ಭಾಗ-೨: ಚಾವುಂಡರಾಯ ಮತ್ತು ನಾಗವರ್ಮ)

ಚಾವುಂಡರಾಯ:
·         ರನ್ನನ ಕಾಲದಲ್ಲಿಯೇ ಚಾವುಂಡರಾಯನು ಜೈನ ತೀರ್ಥಂಕರ ಚರಿತ್ರೆಯನ್ನು ಒಳಗೊಂಡ ಗದ್ಯಗ್ರಂಥ ಚಾವುಂಡರಾಯ ಪುರಾಣವನ್ನು ಬರೆದನು.
·         ಕನ್ನಡದ ಮೊಟ್ಟಮೊದಲ ಗದ್ಯಗ್ರಂಥ ಶಿವಕೋಟ್ಯಾಚಾರ್ಯವೊಡ್ದಾರಾಧನೆಯ ಗದ್ಯವು ಚಾವುಂಡರಾಯ ಪುರಾಣದ ಗದ್ಯಕ್ಕಿಂತ ಉತ್ಕೃಷ್ಟವಾಗಿದೆ ಎಂದು ಶ್ರೀ ಕೆ.ವೆಂಕಟರಾಮಪ್ಪನವರು ಹೇಳುತ್ತಾರೆ.
·         ಜಿನಸೇನ ಮತ್ತು ಗುಣಭದ್ರ ಕವಿಗಳು ಸಂಸ್ಕೃತದಲ್ಲಿ ಬರೆದಿರುವ ಮಹಾಪುರಾಣ ಅಥವಾ ತ್ರಿಷಷ್ಟಿಶಲಾಕಾಪುರುಷ ಪುರಾಣ ಗ್ರಂಥದ ಆಧಾರದಿಂದ ರನ್ನನ ಪೋಷಕ ಚಾವುಂಡರಾಯನು ತನ್ನ ಕೃತಿಯನ್ನು ಕನ್ನಡದಲ್ಲಿ ಬರೆದನು.
·         ಚಾವುಂಡರಾಯ ಗಂಗವಾಡಿಯ ಮಾಂಡಲಿಕರಾಗಿದ್ದ ಮಾರಸಿಂಹ, ನಾಲ್ವಡಿ ರಾಚಮಲ್ಲ ಮತ್ತು ಗಂಗ ರಾಚಮಲ್ಲರ ಆಳ್ವಿಕೆಗಳಲ್ಲಿ ಕ್ರಿ.ಶ.ಸುಮಾರು ೯೬೧ರಿಂದ ೯೮೪ರವರೆಗೆ ದಂಡನಾಯಕನೂ ಮಂತ್ರಿಯೂ ಆಗಿದ್ದಂತೆ ತೋರುತ್ತದೆ.
·         ಶ್ರವಣಬೆಳಗೊಳದ ಗೊಮ್ಮಟೇಶ್ವರ ಶಿಲ್ಪವನ್ನು ಮಾಡಿಸಿದ್ದಕ್ಕಾಗಿ ರಾಚಮಲ್ಲನು ಚಾವುಂಡರಾಯನಿಗೆ ರಾಯ ಬಿರುದನ್ನು ಕೊಟ್ಟನಂತೆ.

ನಾಗವರ್ಮ:
·         ನಾಗವರ್ಮನು ಛಂಧೋಂಬುಧಿ ಮತ್ತು ಕಾದಂಬರಿ ಎಂಬ ಎರಡು ಗ್ರಂಥಗಳನ್ನು ಬರೆದನು.
·         ಕಾದಂಬರಿಯು ಬಾಣಭಟ್ಟನ ಸಂಸ್ಕೃತ ಕಾದಂಬರಿಯ ಅನುವಾದ. ಗದ್ಯಪದ್ಯ ಮಿಶ್ರಿತ ಚಂಪೂ ರೂಪದಲ್ಲಿ ಬರೆದನು.
·         ಕಾದಂಬರಿ ಕಾವ್ಯದಲ್ಲಿ ಪುಂಡರೀಕ-ಮಹಾಶ್ವೇತೆಯರ ಪ್ರಣಯಕಥೆಯೂ, ಕಾದಂಬರೀ-ಚಂದ್ರಪೀಡಾರ ಪ್ರಣಯಕಥೆಯೂ ಸೇರಿಕೊಂಡು ಒಂದು ಕಥೆಯಾಗಿದೆ.
·         ಕಾದಂಬರೀ, ಮಹಾಶ್ವೇತೆಯರು ಅಪ್ಸರ ಸ್ತ್ರೀಯರು. ಅವರು ಒಲಿದ ಚಂದ್ರಪೀಡಾ, ಪುಂಡರೀಕರು ದೈವಾಂಶಸಂಭೂತರಾದರೂ ಮಾನವರು. ಇವರಿಬ್ಬರೂ ಶಾಪದಿಂದ ಜನ್ಮಾಂತರಗಳನ್ನು ಪಡೆಯುತ್ತಾರೆ. ಎರಡು ಜನ್ಮಗಳ ನಂತರ ಅವರು ಕಾದಂಬರೀ ಮಹಾಶ್ವೇತೆಯರನ್ನು ಸೇರುತ್ತಾರೆ.
·         ಕಥೆಯನ್ನು ಕವಿ ಹೇಳದೆ ಅದರ ಬಹುಭಾಗವನ್ನು ಬೇರೆ ಬೇರೆ ಪಾತ್ರಗಳಿಂದ ಹೇಳಿಸುತ್ತಾನೆ. ಕಥೆಯ ಆರಂಭ ಅಂತ್ಯಗಳನ್ನು ಮಾತ್ರ ಕವಿ ಹೇಳುತ್ತಾನೆ. ಅಲ್ಲದೆ ಕಥೆಯನ್ನು ಮೊದಲಿನಿಂದ ಹೇಳದೆ ಮಧ್ಯದಿಂದ ಆರಂಭಿಸುತ್ತಾನೆ.
·         ಕಾದಂಬರಿಯ ಕಥೆ ತೊಡಕಾಗಿದ್ದು, ಕಥೆಗಿಂತ ವರ್ಣನೆಯೇ ಹೆಚ್ಚೆಂದು ಹೇಳಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ